ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಹೊಸಬರು ಹೊಸ ಪ್ರಯೋಗದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ‘ಪ್ರೇಮ ಗೀಮ ಜಾನೆ ದೋ’. ಮೊನ್ನೆಯಷ್ಟೇ ತೆರೆಕಂಡಿರುವ ಈ ಚಿತ್ರವನ್ನು ನೋಡಿದಾಗ ನಿಮಗೆ ಹೊಸತನ ಕಾಣಿಸುತ್ತಿದೆ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಒಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರೀತಿ, ಪ್ರೇಮದ ಜೊತೆಗೆ ಅದನ್ನು ಹೇಳಲು ಅವರು ಆರಿಸಿಕೊಂಡಿರುವ ಮಾರ್ಗ ಇಷ್ಟವಾಗುತ್ತದೆ. ಪ್ರೀತಿ, ಮೋಸ ಹಾಗೂ ದ್ವೇಷದ ಮೂಲಕ ಇಡೀ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಈ ನಡುವೆಯೇ ಕಥೆಗೆ ಲಿಂಕ್ ಕೊಡಲು ಅವರು ಕಾಯಿಲೆಯೊಂದರ ಬಗ್ಗೆ ಹೇಳುವ ಮೂಲಕ ಬುದ್ಧಿವಂತಿಕೆ ತೋರಿದ್ದಾರೆ.
ಪಕ್ಕಾ ಯೂತ್ಲ್ ಸಿನಿಮಾವಾಗಿ ಮೂಡಿಬಂದಿರುವ ‘ಪ್ರೇಮ ಗೀಮ ಜಾನೆ ದೋ’ದಲ್ಲಿ ನಿಮಗೆ ಉತ್ಕಟ ಪ್ರೇಮ, ಮೋಸದ ವಿರುದ್ಧದ ಸೇಡಿನ ಜೊತೆಗೆ ಖುಷಿಕೊಡುವ ತರ್ಲೆ ಮಾತುಗಳು, ದೃಶ್ಯಗಳಿವೆ. ಸಿಂಪಲ್ ಕಥೆಯನ್ನು ಆಯ್ಕೆ ಮಾಡಿದರೂ ಒಂದು ನೀಟಾದ ಸಿನಿಮಾ ಮಾಡಿದ್ದಾರೆನ್ನಬಹುದು. ನಾಯಕ ಗೌತಮ್, ನಾಯಕಿಯರಾದ ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಮೇಶ್ ‘ಟ್ಗೆ ಇಲ್ಲಿ ತುಂಬಾ ಪ್ರಮುಖವಾದ ಪಾತ್ರ ಸಿಕ್ಕಿದ್ದು, ಕಥೆಯ ಟರ್ನಿಂಗ್ ಪಾಯಿಂಟ್ಗೆ ಅವರೇ ಕಾರಣರಾಗುತ್ತಾರೆ. ಒಟ್ಟಾರೆಯಾಗಿ ಹೇಳಬೇಕಾದರೆ ಇದೊಂದು ಹೊಸಬರ ಹೊಸ ಪ್ರಯತ್ನ.