Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಜ್ಜಿಗೆ` ಹುಳಿ ನಾಳೆಯಿಂದ ತೆರೆಗೆ
Posted date: 06 Thu, Jun 2019 – 06:27:07 PM

ಎಸ್.ಎಲ್.ವಿ ಆರ್ಟ್ಸ್ ಲಾಂಛನದಲ್ಲಿ ಎಸ್.ರಾಮಚಂದ್ರ ಅವರು ನಿರ್ಮಿಸಿರುವ ‘ಮಜ್ಜಿಗೆ ಹುಳಿ‘ ಚಿತ್ರ ನಾಳೆಯಿಂದ  (ಜೂನ್ 7)ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಘುರಾಜ್ ಹಾಗೂ ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು.

ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಎಂ.ಸಂಜೀವರಾವ್ ಸಂಗೀತ ನೀಡಿದ್ದಾರೆ. ನರಸಿಂಹಮೂರ್ತಿ, ಶ್ಯಾಂಸುಂದರ್ ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ ಹಾಗೂ ಅರವಿಂದ್, ಹೈಟ್ ಮಂಜು, ಗಗಂ ರಾಜು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದೀಕ್ಷಿತ್ ವೆಂಕಟೇಶ್, ರೂಪಿಕಾ, ಸುಚೀಂದ್ರ ಪ್ರಸಾದ್, ಮೋಹನ್ ಜುನೇಜ, ರಮೇಶ್ ಭಟ್, ಮಿಮಿಕ್ರಿ ದಯಾನಂದ್, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ್, ಮಲ್ಲೇಶ್, ಶಂಕರ್‌ನಾರಾಯಣ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಜ್ಜಿಗೆ` ಹುಳಿ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.