Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಳೆಬಿಲ್ಲು` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
Posted date: 18 Thu, Jul 2019 – 11:38:07 AM

ಅನನ್ಯಾ ಸಿನಿ ಎಂಟರ್‌ಪ್ರೈಸಸರ್ ಲಾಂಛನದಲ್ಲಿ, ನಿಂಗಪ್ಪ ಎಲ್. ನಿರ್ಮಿಸಿರುವ ಮಳೆಬಿಲ್ಲು ಚಿತ್ರ ನಾಳೆಯಿಂದ  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ, ಅವರ ಬದುಕಿನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಏಳುಬಣ್ಣಗಳ ಸಮಾಗಮವಾಗಲಿದೆ ಎನ್ನುವ ಪಕ್ಕಾ ಲವ್ ಕಥಾ ಹಂದರವಿರುವ ಈ ಚಿತ್ರವನ್ನು ನಾಗರಾಜ್ ಹಿರಿಯೂರು ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸಿ. ನಾರಾಯಣ್ ಛಾಯಾಗ್ರಹಣ, ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಹೈಟ್ ಮಂಜು, ಎಂ.ಆರ್.ಕಪಿಲ್ ನೃತ್ಯ ನಿರ್ದೇಶನ, ಶರತ್, ಸಂಜನಾ ಆನಂದ್, ನಯನಾ, ಕಿರ್ಲೋಸ್ಕರ್ ಸತ್ಯನಾರಾಯಣ್, ಶ್ರೀನಿವಾಸ ಪ್ರಭು, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಆಂಜನಪ್ಪ, ಕೃಷ್ಣಮೂರ್ತಿ, ಧಮಯಂತಿ ನಾಗರಾಜ್, ಡಿ.ಕೆ. ಯಶೋಧ, ರವಿತೇಜ, ಅರವನಹಳ್ಳಿ ಆನಂದ್, ಬಾಲಾಜಿ, ಹರ್ಷಿತಾ, ಪ್ರಜ್ವಲ್, ಸೌಮ್ಯಾ, ಡಾ. ನಾಗೇಶ್, ಸಾತ್ವಿಕ್, ಎಂ. ಭೂಪತಿ, ನಿಂಗರಾಜ್ ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಳೆಬಿಲ್ಲು` ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.