Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರಣಭೂಮಿ` ನಾಳೆಯಿಂದ ತೆರೆಗೆ
Posted date: 07 Thu, Nov 2019 – 09:39:27 AM

ಮತ್ತೊಂದು ಸಾಹಸ ಭರಿತ ಸಿನಿಮಾ ಒಂದು ಉತ್ತಮ ಸಂದೇಶ ಇಟ್ಟುಕೊಂಡು ಮಾನಸಿ ಫಿಲ್ಮ್ಸ್ ಅಡಿಯಲ್ಲಿ ‘ರಣಭೂಮಿ’  ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಣಭೂಮಿ ಚಿತ್ರ ನಿರ್ದೇಶನ ಹಾಗೂ ನಿರ್ಮಾಣ ಚಿರಂಜೀವಿ ದೀಪಕ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಹಿಂದೆ ಇವರು ‘ಜೋಕಾಲಿ’ ಕನ್ನಡ ಸಿನಿಮಾ ನಿರ್ದೇಶನ ಮಾಡಿದವರು.

ಸಹ ನಿರ್ಮಾಪಕ ಆಗಿ ಮಂಜುನಾತ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಜೊತೆಯಾಗಿರುವ ಈ ಚಿತ್ರದ ಉಪ ಶೀರ್ಷಿಕೆಯಲ್ಲಿ ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು ಎಂದು ಹೇಳಲಾಗಿದೆ. ಇದೊಂದು ಕ್ರೈಂ, ಸಸ್ಪೆಸ್, ಥ್ರಿಲ್ಲರ್ ಹಾಗೂ ಸಾಹಸ ಭರಿತವಾದ ಚಿತ್ರ.

ಪ್ರದೀಪ್ ವರ್ಮಾ ಸಂಗೀತ, ವಿಜಯ ಭರಮಸಾಗರ ಹಾಗೂ ಹರೀಶ್ ಶೃಂಗ ಗೀತೆಗಳು, ಛಾಯಾಗ್ರಾಹಕ ಆಗಿ ನಾಗರ್ಜುನ್, ಕರ್ವ ವೆಂಕಿ ಸಂಕಲನ, ರಾಷ್ಟ್ರ ಪ್ರಶಸ್ತಿ ವಿಜೇತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಸಾಹಸ ಹಾಗೂ ಕಂಬಿ ರಾಜು ನೃತ್ಯ ನಿರ್ದೇಶನ  ಮಾಡಿದ್ದಾರೆ.

ನಿರಂಜನ್ ವಡೆಯರ್, ಕಾರುಣ್ಯ ರಾಮ್, ಶೀತಲ್ ಶೆಟ್ಟಿ, ರಮೇಶ್ ಭಟ್, ರಥಾವರ ಲೋಕಿ, ಡೇನಿಯಲ್ ಕುಟ್ಟಪ್ಪ, ಮುನಿ, ಹಮುಮಂತೆ ಗೌಡ ಹಾಗೂ ಇತರರು ತಾರಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರಣಭೂಮಿ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.