ಬಿ.ಎಸ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಿಸುತ್ತಿರುವ ‘ತಿರ್ಬೋಕಿಗಳು‘ ಚಿತ್ರಕ್ಕಾಗಿ ನರಸಿಂಹಸ್ವಾಮಿ ಅವರು ಬರೆದಿರುವ ‘ಬಾಟ್ಲು ಓಪನ್ ಮಾಡೊ ಹೊತ್ತು. ಬಿತ್ತು ಕೆನ್ನೆ ಮೇಲೆ ಮುತ್ತು.‘ ಎಂಬ ಹಾಡಿನ ಚಿತ್ರೀಕರಣದಲ್ಲಿ ಭೂಷಣ್, ತರುಣ್ ಸುಧೀರ್, ಸಂತೋಷ್ ಹಾಗೂ ಸ್ನೇಹ ಆಚಾರ್ಯ ಅಭಿನಯಿಸಿದ್ದಾರೆ. ಚಂದ್ರಲೇಔಟ್ನ ಚಾರ್ಕೋಲ್ ಪಬ್ನಲ್ಲಿ ನಡೆದ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಕೆಂಪೇಗೌಡ ಮಾಗಡಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ.
ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. ಬಿಬಿನ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಸಹ ನಿರ್ದೇಸನವಿರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತಾದವರಿದ್ದಾರೆ.