ಜನನಿ ಫಿಲಿಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ಅಲ್ಲೇಡ್ರಾ ಅಲ್ಲೇ ಬಹುಮಾನ ಚಿತ್ರವು ಬಹುತೇಕ ಪೂರ್ಣಗೊಂಡಿದ್ದು, ಚಿತ್ರಕ್ಕೆ ಗೀತೆಯೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಚಿತ್ರಕ್ಕಾಗಿ ಇತ್ತೀಚೆಗೆ ನಟ ಉಪೇಂದ್ರ ಹಾಡಿರುವ ಗೀಚು ನಿಂಗೆ ಇಲ್ಲಿ ಒಂದಂಗೆ ಗೀಚು ಎಂಬ ಗೀತೆಯನ್ನು ನಗರದ ಕುಮಾರಸ್ವಾಮಿ ಲೇಔಟ್ನಲ್ಲಿರುವ ಪಾರೇಖ್ ಸ್ಟುಡಿಯೋವಿನಲ್ಲಿ ಸಂಗೀತ ನಿರ್ದೇಶಕ ವಿಜಯರಾಜ್ ಧ್ವನಿಮುದ್ರಿಸಿ ಕೊಂಡರು.
ಚಿತ್ರಕ್ಕೆ ರಘುಶಾಸ್ತ್ರೀ ಸಾಹಿತ್ಯ, ವಿಜಯರಾಜ್ ಸಂಗೀತ, ನಾಗರಾಜ್ ನೃತ್ಯ, ಉಜ್ವಲ್ಚಂದ್ರ ಸಂಕಲನವಿದ್ದು, ಸಾಹಸ ಡಿಫರೆಂಟ್ಡ್ಯಾನಿ,ಕಥೆ ಚಿತ್ರಕಥೆ ನಿರ್ದೇಶನ ರತ್ನತೀರ್ಥ.
ತಾರಾಗಣದಲ್ಲಿ ಶೌರ್ಯ, ರುಷಿಕರಾಜ್, ಶಂಕರ್ಅಶ್ವತ್ಥ್, ರಘುರಾಮನ್ಕೊಪ್ಪ, ವಿಜಯ್ಚಂಡೂರ್, ಸುಮಂತ, ಧನು,ಕುರಿಬಾಂಡ್ ರಂಗಸ್ವಾಮಿ, ಮುಂತಾದವರಿದ್ದಾರೆ.