Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಲ್ಲೇಡ್ರಾಅಲ್ಲೇ ಬಹುಮಾನ ಉಪ್ಪಿ ಹಾಡು
Posted date: 06 Mon, Sep 2021 10:42:26 AM
ಜನನಿ ಫಿಲಿಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ಅಲ್ಲೇಡ್ರಾ ಅಲ್ಲೇ ಬಹುಮಾನ ಚಿತ್ರವು ಬಹುತೇಕ ಪೂರ್ಣಗೊಂಡಿದ್ದು, ಚಿತ್ರಕ್ಕೆ ಗೀತೆಯೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಚಿತ್ರಕ್ಕಾಗಿ ಇತ್ತೀಚೆಗೆ ನಟ ಉಪೇಂದ್ರ ಹಾಡಿರುವ ಗೀಚು ನಿಂಗೆ ಇಲ್ಲಿ ಒಂದಂಗೆ ಗೀಚು ಎಂಬ ಗೀತೆಯನ್ನು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಪಾರೇಖ್ ಸ್ಟುಡಿಯೋವಿನಲ್ಲಿ ಸಂಗೀತ ನಿರ್ದೇಶಕ ವಿಜಯರಾಜ್‌ ಧ್ವನಿಮುದ್ರಿಸಿ ಕೊಂಡರು. 

ಚಿತ್ರಕ್ಕೆ ರಘುಶಾಸ್ತ್ರೀ ಸಾಹಿತ್ಯ, ವಿಜಯರಾಜ್ ಸಂಗೀತ, ನಾಗರಾಜ್ ನೃತ್ಯ, ಉಜ್ವಲ್‌ಚಂದ್ರ ಸಂಕಲನವಿದ್ದು, ಸಾಹಸ ಡಿಫರೆಂಟ್‌ಡ್ಯಾನಿ,ಕಥೆ ಚಿತ್ರಕಥೆ ನಿರ್ದೇಶನ ರತ್ನತೀರ್ಥ. 
ತಾರಾಗಣದಲ್ಲಿ ಶೌರ್ಯ, ರುಷಿಕರಾಜ್, ಶಂಕರ್‌ಅಶ್ವತ್ಥ್, ರಘುರಾಮನ್‌ಕೊಪ್ಪ, ವಿಜಯ್‌ಚಂಡೂರ್, ಸುಮಂತ, ಧನು,ಕುರಿಬಾಂಡ್‌ ರಂಗಸ್ವಾಮಿ, ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಲ್ಲೇಡ್ರಾಅಲ್ಲೇ ಬಹುಮಾನ ಉಪ್ಪಿ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.