Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಲ್ಫ್ ಕನ್ನಡಿಗರ ಜತೆ ಜಗ್ಗೇಶ್ ಮಾತುಕತೆ ದುಬೈನಲ್ಲೂ `ತೋತಾಪುರಿ` ದರ್ಬಾರ್
Posted date: 23 Wed, Feb 2022 04:46:00 PM
ನವರಸ ನಾಯಕ ಜಗ್ಗೇಶ್ ನಟನೆಯ `ತೋತಾಪುರಿ` ಎಲ್ಲೆಡೆ ಮಿಂಚು ಹರಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ `ಬಾಗ್ಲು ತೆಗಿ ಮೇರಿ ಜಾನ್` ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಭಾಷೆಯವರೂ ಈ ಹಾಡನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮಿಲಿಯನ್`ಗಟ್ಟಲೆ ಹಿಟ್ಸ್ ದಾಖಲಿಸಿರುವುದೇ ಸಾಕ್ಷಿ.

ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಇದರ ಸಂಭ್ರಮವನ್ನು ಜಗ್ಗೇಶ್ ಅವರೊಂದಿಗೆ ಗ್ಲೋಬಲ್ ವರ್ಚುವಲ್ ಮೀಟ್ ಮೂಲಕ ಹೆಚ್ಚಿಸಿದ್ದು `ತೋತಾಪುರಿ` ತಂಡಕ್ಕೆ ಹುರುಪು ತುಂಬಿದೆ. ಅದರ ಬೆನ್ನಲ್ಲೇ  ಇದೀಗ ದುಬೈನಲ್ಲೂ ಗ್ಲೋಬಲ್ ಮೀಟ್ ಸಂಭ್ರಮಕ್ಕೆ `ತೋತಾಪುರಿ` ಸಾಕ್ಷಿಯಾಗಲಿದೆ.

ಹೌದು. ಫೆಬ್ರವರಿ 25ರ ಶುಕ್ರವಾರ ಭಾರತೀಯ ಕಾಲಮಾನ ರಾತ್ರಿ 7.30ರಿಂದ ಗಲ್ಫ್ ಕನ್ನಡಿಗರೊಂದಿಗೆ ಜಗ್ಗೇಶ್ ಮಾತುಕತೆ ನಡೆಸಲಿದ್ದಾರೆ. ಒಮನ್, ಬಹ್ರೇನ್, ಕತಾರ್, ಕುವೈತ್ ಸೇರಿದಂತೆ ನೆರೆಹೊರೆಯ ಕನ್ನಡಿಗರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಓವರ್ಸೀ ಸ್ ಕನ್ನಡ ಮೂವೀಸ್ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಚಿತ್ರತಂಡ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. `ಮೋನಿಫ್ಲಿಕ್ಸ್ ಆಡಿಯೋಸ್` ಯೂ ಟ್ಯೂಬ್ ಚಾನಲ್`ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಕೆ.ಎ.ಸುರೇಶ್ ನಿರ್ಮಾಣವಿದೆ. `ಡಾಲಿ`ಧನಂಜಯ್, ಅದಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ನಿರಂಜನ್ ಬಾಬು ಛಾಯಾಗ್ರಹಣವಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಲ್ಫ್ ಕನ್ನಡಿಗರ ಜತೆ ಜಗ್ಗೇಶ್ ಮಾತುಕತೆ ದುಬೈನಲ್ಲೂ `ತೋತಾಪುರಿ` ದರ್ಬಾರ್ - Chitratara.com
Copyright 2009 chitratara.com Reproduction is forbidden unless authorized. All rights reserved.