Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರಕ್ಕೆ ಆಕಾಶ್‌ ಶ್ರೀವತ್ಸ ನಿರ್ದೇಶನದ``ದೈಜಿ``ಚಿತ್ರದ ಮುಹೂರ್ತ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿತು
Posted date: 13 Mon, Jan 2025 01:57:15 PM
"ದೈಜಿ" ಚಿತ್ರದ ಮುಹೂರ್ತ ಭಾನುವಾರದ ಬೆಳಗಿನ ಸುಮುಹೂರ್ತದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಈ ಚಿತ್ರವು ಡಾಕ್ಟರ್ ರಮೇಶ ಅರವಿಂದ್ ರವರು  ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಇದು . ಈ ಚಿತ್ರದ ನಿರ್ಮಾಪಕರು ವಿಭಾ  ಕಶ್ಯಪ್ ಎಂಬ ಸಂಸ್ಥೆ ಅದರ ಮುಖ್ಯಸ್ಥರಾದ ರವಿಕಶ್ಯಪ್ ರವರು , ಇದರ ನಿರ್ದೇಶಕರು ಆಕಾಶ್ ಶ್ರೀವತ್ಸ ರವರು ಈ ಹಿಂದೆ ಶಿವಾಜಿ ಸೂರತ್ಕಲ್ ಭಾಗ-1 ಮತ್ತು ಶಿವಾಜಿ ಸೂರತ್ಕಲ್ ಭಾಗ 2 ನ್ನು ಸರಣಿಯಾಗಿ ನಿರ್ದೇಶಿಸಿದ್ದು , ಡಾಕ್ಟರ್ ರಮೇಶ್ ಅರವಿಂದ್ ರವರು ಮತ್ತು ಆಕಾಶ್ ಶ್ರೀವತ್ಸ ರವರ  ನಿರ್ದೇಶನದ ಸಂಯೋಜನೆಯಲ್ಲಿ ಮೂಡಿ ಬರುತ್ತಿರುವಂತಹ ಮೂರನೇ ಚಿತ್ರವಾಗಿದ್ದು 
ಈ ಚಿತ್ರದ ನಾಯಕ ನಟಿಯಾಗಿ ನಟಿಸುತ್ತಿರುವುದು ರಾಧಿಕಾ ನಾರಾಯಣ್ ಈ ಮುಂಚೆಯೂ ಸಹ ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ .
 
ಈ ಚಿತ್ರಕ್ಕೆ ಛಾಯಾಗ್ರಾಹಣ ಮಾಡುತ್ತಿರುವುದು  ಶ್ರೀಶ ಕುದುವಳ್ಳಿ ರವರು ಈ ಹಿಂದೆ ಇವರು ಯಜಮಾನ , ಯುವ ಖ್ಯಾತಿಯ ಛಾಯಾಗ್ರಾಹಕರಾಗಿದ್ದಾರೆ ಈ ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿ ವಿದೇಶದಲ್ಲಿ ಪ್ರಾರಂಭವಾಗಲಿದೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರಕ್ಕೆ ಆಕಾಶ್‌ ಶ್ರೀವತ್ಸ ನಿರ್ದೇಶನದ``ದೈಜಿ``ಚಿತ್ರದ ಮುಹೂರ್ತ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿತು - Chitratara.com
Copyright 2009 chitratara.com Reproduction is forbidden unless authorized. All rights reserved.