Chief Editor
Manohar. R (Manu)
Photo Journalist
chitrataramanu@gmail.com
+91 9845549026
``ದಿ`` ದಟ್ಟ ಕಾಡಲ್ಲಿ ಕಣ್ಮರೆಯಾದ ನವದಂಪತಿಗಳು....
Posted date: 18 Sun, May 2025 12:08:33 PM
ಚಿತ್ರ : "ದಿ"
ನಿರ್ದೇಶಕ : ವಿನಯ್ ವಾಸುದೇವ್
ನಿರ್ಮಾಣ : ವಿ.ಡಿ.ಕೆ. ಸಿನಿಮಾಸ್
 ಸಂಗೀತ : ಯು.ಎಂ. ಸ್ಟೀವನ್
ಛಾಯಾಗ್ರಹಣ : ಅಲೆನ್ ಭರತ್
ತಾರಾಗಣ : ವಿನಯ್ ವಾಸುದೇವ್, ದಿಶಾ ರಮೇಶ್,
ಹರಿಣಿ ಶ್ರೀಕಾಂತ್, ಬಾಲ ರಾಜವಾಡಿ , ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್ ಹಾಗೂ ಇತರರು...
 
ಕೆಲವರ ಜೀವನದಲ್ಲಿ ಪ್ರೀಯಿಯ ಹಾದಿ ತುಂಬಾ ಸುಗಮವಾಗಿದ್ದರೆ,  ಇನ್ನೂ ಕೆಲವರ ಪ್ರೀತಿಯ ಪಯಣ ಅಷ್ಟೇ  ದುರ್ಗಮವಾಗಿರುತ್ತದೆ. ಕಾಡು ಮೇಡಲ್ಲೂ ಅಲೆದಾಡಿಸುತಗಯದೆ. ಅದೇರೀತಿ ಇಲ್ಲೊಂದು  ಜೋಡಿಯ ಬದುಕಿನ  ಪಯಣದಲ್ಲಿ ಕಾಡು ತೋರಿಸುವ ಕರಾಳ ಹಾದಿ ಏನೆಲ್ಲಾ ಸೃಷ್ಟಿ ಮಾಡುತ್ತದೆ ಎಂಬುದನ್ನು ವಿನಯ್ ವಾಸುದೇವ್ ಅವರು ತಮ್ಮ ನಿರ್ದೇಶನದ "ದಿ" ಚಿತ್ರದಲ್ಲಿ ರೋಮಾಂಚನಕಾರಿಯಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
 
ರಿಟೈರ್ಡ್ ಫಾರೆಸ್ಟ್ ಆಫೀಸರ್ ನಾರಾಯಣ್ (ಬಲ ರಾಜವಾಡಿ) ಹಾಗೂ ಡಾಕ್ಟರ್ ಪದ್ಮ (ಹರಿಣಿ ಶ್ರೀಕಾಂತ್) ದಂಪತಿಗಳ‌ ಸಾಕುಮಗ ದೀಪಕ್ (ವಿನಯ್ ವಾಸುದೇವ್)ಗೆ ಕಾಡೆಂದರೆ ಜೀವ,
 
ಅನಿಮಲ್ ಸೈಕಾಲಜಿ ಓದಿಕೊಂಡಿದ್ದ , ಟ್ರಕಿಂಗ್ , ಫೋಟೋಗ್ರಫಿ  ಆತನ ಹವ್ಯಾಸ. ಪೋಷಕರ ಒಪ್ಪಿಗೆ ಇಲ್ಲದಿದ್ದರೂ ದಿವ್ಯ (ದಿಶಾ ರಮೇಶ್) ಳನ್ನ ಪ್ರೀತಿಸಿ ಮದುವೆಯಾಗುತ್ತಾನೆ. ನವ ದಂಪತಿಗಳು  ವಿಹಾರಕ್ಕಾಗಿ ದಟ್ಟ ಕಾಡಿನೊಳಗೆ ಹೋಗಲು ನಿರ್ಧರಿಸುತ್ತಾರೆ. ಇವರಿಗೆ  ಮತ್ತೊಬ್ಬ ಫಾರೆಸ್ಟ್ ಆಫೀಸರ್ ಕಾರ್ತಿಕ್ (ನಾಗೇಂದ್ರ ಅರಸ್) ಸಹಾಯ ಮಾಡುತ್ತಾನೆ. ಈ ನಡುವೆ ಕಾಡಿನೊಳಗೆ ಪ್ರಾಣಿ ಹಂತಕರ ತಂಡ, ಕಾಡನ್ನೇ ದೇವರೆಂದು ಪೂಜಿಸುವ ಕಾಡಿನ ಜನರ ಬದುಕು ಮತ್ತೊಂದೆಡೆ. ಸುಂದರ ವನಸಿರಿಯ ಸೊಬಗನ್ನ ಸವಿಯುತ್ತಾ ದೀಪಕ್ ತನ್ನ ಹೆಂಡತಿಯ ಫೋಟೋ ತೆಗೆಯುವಾಗ ತುದಿಯಲ್ಲಿ ನಿಂತಿದ್ದ  ದಿವ್ಯ ಕಾಲುಜಾರಿ ಪ್ರಪಾತಕ್ಕೆ ಬೀಳುತ್ತಾಳೆ. ಆಕೆಯನ್ನು ರಕ್ಷಿಸಲು ಹೋದ ದೀಪಕ್ ಕೂಡ ಮೇಲಿಂದ ಬೀಳುತ್ತಾನೆ. ದಟ್ಟ ಅರಣ್ಯ, ಪ್ರಾಣಿಗಳ ಪ್ರದೇಶವಾಗಿದ್ದು , ಮುಂದೇನು ಎಂಬ ಆತಂಕದಲ್ಲಿ ಆ ಅಧಿಕಾರಿ ಮನೆಯವರಿಗೆ ವಿಷಯ ತಿಳಿಸುತ್ತಾನೆ. ಮೇಲಿಂದ ಬಿದ್ದ  ನವಜೋಡಿ ಇನ್ನೂ ಬದುಕಿದ್ದಾರೋ, ಅಥವಾ ಕಾಡು ಪ್ರಾಣಿಗಳಿಗೆ ಆಹಾರವಾದರೇ, ಮಗನನ್ನು ಕಳೆದುಕೊಂಡ ತಂದೆ ತಾಯಿಯ  ನೋವು.. ಪೊಲೀಸರ ಹುಡುಕಾಟ..ಇದಕ್ಕೆಲ್ಲ   `ದಿ`. ಚಿತ್ರದ   ಕ್ಲೈಮಾಕ್ಸ್ ನಲ್ಲಿ ಉತ್ತರವಿದೆ. 
 
ನಿರ್ದೇಶಕ ಹಾಗೂ ನಾಯಕನಾಗಿ ವಿನಯ್ ವಾಸುದೇವ್ ಎರಡೂ ಕೆಲಸಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಡೀ ಕಾಡನ್ನೇ ಕಥೆಯ  ಕೇಂದ್ರವಾಗಿ ಬಳಸಿಕೊಂಡಿದ್ದಾರೆ.  ಬಾಂಧವ್ಯದ ನಡುವೆ ಪ್ರೀತಿಯ ಬೆಸುಗೆಯ ಸಂಭ್ರಮದಲ್ಲಿ ವಿಧಿ ಹೇಗೆಲ್ಲ  ಆಟವಾಡುತ್ತದೆ ಎಂಬುದನ್ನು  ಸರಳವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರೀತಿಗೆ ಸಾವಿಲ್ಲ ಎಂಬ ಸಂದೇಶದ ಜೊತೆಗೆ ಸ್ನೇಹ ಸಂಬಂಧದ ಮೌಲ್ಯವನ್ನು  ಚಿತ್ತದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
 
ಗ್ರಾಫಿಕ್ ನಲ್ಲಿ  ಕರಡಿ ಫೈಟ್, ಆನೆ  ಸೇರಿದಂತೆ ಹಲವು ದೃಶ್ಯಗಳನ್ನು ತೋರಿಸಿರುವ  ಪ್ರಯತ್ನ ಉತ್ತಮವಾಗಿದೆ. ನಾಯಕನಾಗಿ ವಿನಯ್ ವಾಸುದೇವ್ ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾಯಕಿ  ದಿಶಾ ರಮೇಶ್ ಕೂಡ ಲವಲವಿಕೆಯ ಅಭಿನಯದಿಂದ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ನಾಗೇಂದ್ರ ಅರಸ್ ಗಮನ ಸೆಳೆಯುತ್ತಾರೆ. ಪ್ರಾಣಿ ಹಂತಕರಾಗಿ ಕಾಡ ಹಾಗೂ ಡಾಲ ಪಾತ್ರಗಳು ಗಮನ ಸೆಳೆಯುತ್ತವೆ. ಸಂಗೀತ, ಹಿನ್ನೆಲೆ ಸಂಗೀತ, ಸಂಕಲನ , ಛಾಯಾಗ್ರಹಣ ಎಲ್ಲ ವಿಭಾಗಗಳಲ್ಲಿ ಚಿತ್ರ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿರುವುದು ಎದ್ದು ಕಾಣುತ್ತದೆ. ದಿ ಒಂದು ಪರ್ ಫೆಕ್ಟ್ ಫ್ಯಾಮಿಲಿ ಎಂಟರ್ ಟೈನರ್ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ದಿ`` ದಟ್ಟ ಕಾಡಲ್ಲಿ ಕಣ್ಮರೆಯಾದ ನವದಂಪತಿಗಳು.... - Chitratara.com
Copyright 2009 chitratara.com Reproduction is forbidden unless authorized. All rights reserved.