Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ..ಅಶ್ವಿನಿ ಪುನೀತ್ ಅವರ ಕನಸಿಗೆ ಶಾಸಕ ಗೋಪಾಲಯ್ಯ-ಅನುಶ್ರೀ ಸಾಥ್
Posted date: 25 Sun, May 2025 02:05:53 PM
ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಬೆಂಗಳೂರಿನ ರಾಜಾಜಿನಗರನಲ್ಲಿಂದು ಶುಭಾರಂಭಗೊಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಈ ಶಿಕ್ಷಣದ ಕನಸಿಗೆ ಆಂಕರ್ ಅನುಶ್ರೀ ಹಾಗೂ ಶಾಸಕ ಗೋಪಾಲಯ್ಯ ಸಾಥ್ ಕೊಟ್ಟರು. ಜೂನಿಯರ್ ಟೋಸ್ ರಾಜಾಜಿನಗರ ಬ್ರ್ಯಾಂಚ್ ಉದ್ಘಾಟನಾ ಕಾರ್ಯಕ್ರಮಕ್ಕೆ ಗೋಪಾಲಯ್ಯ ಹಾಗೂ ಅನುಶ್ರೀ ವಿಶೇಷ ಅತಿಥಿಯಾಗಿ ಆಗಮಿಸಿ ಅಶ್ವಿನಿಯವರ ಶಿಕ್ಷಣದ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. 
 
ಜೂನಿಯರ್ ಟೋಸ್ ಬ್ರ್ಯಾಂಚ್ ಉದ್ಘಾಟನೆ ಬಳಿಕ ಮಾತನಾಡಿ, ಆಂಕರ್ ಅನುಶ್ರೀ, ಜೂನಿಯರ್ ಟೋಸ್ ಅಪ್ಪು ಸರ್ ಹಾಗೂ ಅಶ್ವಿನಿ ಮೇಡಂ ಅವರ ಅತಿ ದೊಡ್ಡ ಕನಸು. ಅಪ್ಪು ಸರ್ ಗೆ ಕ್ವಾಲಿಟಿ ಎಜುಕೇಶನ್ ಕೊಡಬೇಕು ಬಹಳ ಇಷ್ಟವಿತ್ತು. ಅಪ್ಪು ಸರ್  ಸಣ್ಣ ವಯಸ್ಸಿನಲ್ಲಿಯೇ ಅತಿ ದೊಡ್ಡ ಯಶಸ್ಸು ಕಂಡ ಪ್ರತಿಭೆ.  ಆ ಪ್ರತಿಭೆ ಅನ್ನೋದು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಕಂಡು ಹಿಡಿದು, ಅದಕ್ಕೊಂದು ಮಾರ್ಗ ಕಂಡುಹಿಡಿದು, ವೇದಿಕೆ ಕಲ್ಪಿಸಿಕೊಡಲು ಜೂನಿಯರ್ ಟೋಸ್ ಎಂಬ ಹೊಸದೊಂದು ಸಂಸ್ಥೆ ಶುರುವಾಗಿದೆ. ಇದು ನಮ್ಮ ರಾಜಾಜಿ ನಗರನಲ್ಲಿ 12ನೇ ಬ್ರ್ಯಾಂಚ್. ಕಿರಣ್ ಹಾಗೂ ದೀಪ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದೆ. ನನ್ನ‌ ಕಡೆಯಿಂದ ಅವರಿಗೆ ಬೆಸ್ಟ್ ವಿಷಸ್. ಪೋಸ್ಟರ್‌ನಲ್ಲಿ ನಮ್ಮ ಬಾಸ್ ಅಪ್ಪು ಸರ್ ಇದ್ದಾರೆ. ಅವರು ಎಲ್ಲಿ ಇರ್ತಾರೋ ಅಲ್ಲಿ ಪವರ್ ಇರುತ್ತದೆ. ಇಲ್ಲಿ ಬಂದು ಕಲಿಯುವ ಮಗು ಅಪ್ಪು ಸರ್ ಅವರಂತಹ ಗುಣಗಳನ್ನು, ಒಳ್ಳೆ ವಿದ್ಯೆ ಕಲಿತು. ದೊಡ್ಡ ಹೆಸರು ಮಾಡಲಿ ಎಂದು ಹಾರೈಸಿದರು.‌
 
ಶಿಕ್ಷಣ ಕ್ಷೇತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಪಾರ ಕನಸು ಹೊಂದಿದ್ದರು. ಈಗ ಅಪ್ಪು ಕನಸು ನನಸು ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, `Junior Toes International Preschool` ನ್ನು ಆರಂಭಿಸಿದ್ದಾರೆ.
 
ಅಶ್ವಿನಿ ಅವರ ಜೊತೆ ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ ಸ್ಪೂರ್ತಿ ವಿಶ್ವಾಸ್, ಸುನಿತಾ ಗೌಡ ಮತ್ತು ಶೃತಿ ಕಿರಣ್‌ ಕೈಜೋಡಿಸಿ ಶುರು ಮಾಡಿದ್ದಾರೆ. ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್ 12 ಕೇಂದ್ರಗಳನ್ನು ಶುರು ಮಾಡಿದ್ದು, ಮೈಸೂರಿನಲ್ಲಿ ಒಂದು ಕೇಂದ್ರವಿದೆ.‌
 
ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಖ್ಯಾತ ಶಿಕ್ಷಣ ತಜ್ಞೆ ಸುನೀತಾ ಗೌಡ, ಸ್ಪೂರ್ತಿ ವಿಶ್ವಾಸ್ ಹಾಗೂ ಶೃತಿ ಕಿರಣ್‌ ಸಂಸ್ಥಾಪಿಸಿರುವ ಈ ಶಾಲೆಯೂ ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ ಜೂನ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತಿದೆ.
 
ಜೂನಿಯರ್ ಟೋಸ್ ಕಲಿಕಾ ಕೇಂದ್ರ ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮ ಇರಲಿವೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ, ಅವು ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ನಾಯಕತ್ವಕ್ಕೆ ಪ್ರೇರಣೆ ನೀಡುವ ಸ್ಥಳಗಳಾಗಿ ರೂಪುಗೊಳ್ಳುತ್ತಿವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಜಾಜಿನಗರದಲ್ಲಿ ಜೂನಿಯರ್ ಟೋಸ್ ಶುಭಾರಂಭ..ಅಶ್ವಿನಿ ಪುನೀತ್ ಅವರ ಕನಸಿಗೆ ಶಾಸಕ ಗೋಪಾಲಯ್ಯ-ಅನುಶ್ರೀ ಸಾಥ್ - Chitratara.com
Copyright 2009 chitratara.com Reproduction is forbidden unless authorized. All rights reserved.