Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೈಜಿ ಸಿನೆಮಾ ತಂಡದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಶುಭ ಹಾರೈಕೆ
Posted date: 03 Tue, Jun 2025 , 05:32:57 PM
ಐಪಿಎಲ್ ನ ಫ಼ೈನಲ್ಸ್ ಗೆ ಆರ್ಸಿಬಿ ತಂಡ ತಲುಪಿರುವ ಹಿನ್ನೆಲೆಯಲ್ಲಿ, ದೈಜಿ ಸಿನೆಮಾ ತಂಡವು ನಗರದ ನ್ಯೂ ಬಿ.ಇ.ಎಲ್ ರಸ್ತೆಯಲ್ಲಿರುವ ಮಸಾಲ ಮಾರ್ಟಿನಿ ಪಬ್ ನಲ್ಲಿ ಚಿತ್ರದ ಶೂಟಿಂಗ್ ವೇಳೆ ಸಂಭ್ರಮಿಸಿ ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿತು. 

ಈ ಸಂದರ್ಭದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ದೈಜಿ ಸಿನೆಮಾದ ಮುಖ್ಯ ತಾರಾಗಣದಲ್ಲಿರುವ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ದಿಗಂತ್, ನಿಧಿ ಹೆಗ್ಡೆ ಹಾಗೂ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಮತ್ತು ನಿರ್ಮಾಪಕರಾದ ರವಿ ಕಶ್ಯಪ್ ಇವರೆಲ್ಲರೂ ತಂಡದ ಇನ್ನಿತರ ಸದಸ್ಯರೊಂದಿಗೆ ಆರ್ಸಿಬಿ ತಂಡದ ಜೆರ್ಸಿ ಧರಿಸಿ, ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿ ಹಾರೈಸಿದರು. 

೧೮ ವರ್ಷಗಳಲ್ಲಿ ಮೂರನೇ ಬಾರಿ ಐಪಿಎಲ್ ಫ಼ೈನಲ್ಸ್ ಗೆ ತಲುಪಿರುವ ಆರ್ಸಿಬಿ ತಂಡ ಈ ಸಲ ಕಪ್ ತಮ್ಮದಾಗಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಇಡೀ ತಂಡ ಆರ್ಸಿಬಿ ಜೆರ್ಸಿ ಧರಿಸಿ, ಬಾವುಟ ಹಿಡಿದು ಒಕ್ಕೊರಲಿನಿಂದ ತಮ್ಮ ಹಾರೈಕೆಗಳನ್ನು ವ್ಯಕ್ತಪಡಿಸಿದ್ದು ಸೆಟ್ ನಲ್ಲಿ ನೆರೆದಿದ್ದ ಎಲ್ಲರಲ್ಲೂ ವಿಶೇಷ ಸಂಚಲನ ಮೂಡಿಸಿತ್ತು. 

ಈ ಮಧ್ಯೆ ಚಿತ್ರದ ನಿರ್ಮಾಪಕ ರವಿ ಕಶ್ಯಪ್ ರವರು - "ನಮ್ಮ ತಂಡದ ಎಲ್ಲರೂ ತಮ್ಮ ಹೃದಯದಾಳದಿಂದ, ಒಕ್ಕೊರಲಿನಿಂದ ಆರ್ಸಿಬಿ ತಂಡ ಫ಼ಿನಲ್ಸ್ ನಲ್ಲಿ ಜಯಗಳಿಸಲಿ" ಎಂದು ಹಾರೈಸುತ್ತಿದ್ದೇವೆ ಎಂದರು. ಮುಂದುವರೆದು, "ಒಂದು ಉತ್ಸಾಹಿ ಸಿನೆಮಾ ತಂಡವಾಗಿ ನಾವು ಆರ್ಸಿಬಿ ತಂಡದ ಶ್ರಮವನ್ನು ಅರ್ಥ ಮಾಡಿಕೊಂಡು, ಆ ತಂಡವನ್ನು ಪ್ರೋತ್ಸಾಹಿಸುವುದು ಹಾಗೂ ಅದರ ಗೆಲುವಿಗಾಗಿ ಹಾರೈಸುವುದು ಮುಖ್ಯ. ಇಂದಿನ ಫ಼ೈನಲ್ಸ್ ನಲ್ಲಿ ಆರ್ಸಿಬಿ ತಂಡ ಜಯಗಳಿಸಿ ಕಪ್ ತರಲಿ ಎಂಬುದು ನಮ್ಮೆಲ್ಲರ ಆಶಯ" ಎಂದರು. 

ದೈಜಿ ಸಿನೆಮಾವು ಸತ್ಯ ಘಟನೆಯಾಧಾರಿತ ಕಥೆಯಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ದೈಜಿ ಚಿತ್ರದ ನಿರ್ಮಾಣದಲ್ಲಿ ಹಗಲಿರುಳೂ ಶ್ರಮವಹಿಸಿ ತಂಡ ಕೆಲಸ ಮಾಡುತ್ತಿದೆ ಈಗ ಅದರ ಜತೆಗೆ ಸೆಟ್ ನಲ್ಲಿ ಐಪಿಎಲ್ ನ ಸಂಭ್ರಮಾಚರಣೆಯೂ ಜತೆಯಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೈಜಿ ಸಿನೆಮಾ ತಂಡದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಶುಭ ಹಾರೈಕೆ - Chitratara.com
Copyright 2009 chitratara.com Reproduction is forbidden unless authorized. All rights reserved.