Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ
Posted date: 01 Fri, Aug 2025 10:28:19 PM
ಕರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಆರೋಗ್ಯ ಸ್ಥಿತಿ ತೀರ ಗಂಭೀರವಾಗಿದೆ‌. ಕಳೆದ ತಿಂಗಳು  ಜಾಂಡೀಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ  ಮರಳಿದ್ದ ಸಂತೋಷ್, ಮೊನ್ನೆಯಷ್ಟೇ ಮತ್ತೆ  ತೀವ್ರ ಅಸ್ವಸ್ಥರಾಗಿದ್ಸಾರೆ. ಆ ಕೂಡಲೇ ಅವರನ್ನು ಕುಮಾರಸ್ವಾಮಿ ಲೇ ಔಟ್ ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದೆ. ಈಗವರ ಆರೋಗ್ಯ ಸ್ಥಿತಿ ತೀರ ಗಂಭೀರ ಸ್ಥಿತಿ ತಲುಪಿದೆ. 
 
ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಅಭಿನಯದ ಸತ್ಯ ಚಿತ್ರ ಇನ್ನೂ ರಿಲೀಸಾಗಬೇಕಿತ್ತು. ಎಲ್ಲರ ಜತೆ ಸದಾ ನಗು ನಗುತ್ತಲೇ ಸ್ನೇಹದಿಂದ ಮಾತನಾಡುತ್ತಿದ್ದ  ಸಂತೋಷ್  ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು.  ಇನ್ನೂ 38 ವರ್ಷದ  ಸಂತೋಷ್ ಬಾಲರಾಜ್  ಸದ್ಯದಲ್ಲೇ ಮದುವೆಯಾಗುವ ಸಿದ್ದತೆಯನ್ನೂ  ನಡೆಸಿದ್ದರು. 
 
ಒಬ್ಬಳೇ ತಂಗಿ ಹಾಗೂ ತಾಯಿಯ ಜತೆಯಿದ್ದ  ಸಂತೋಷ್ ಈಗ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ತಾಯಿ ಕೂಡ ಅನಾರೋಗ್ಯದಿಂದ ಓಡಾಡುವ ಸ್ಥಿತಿಯಲ್ಲಿಲ್ಲ.
(ಹೆಚ್ಚಿನ ಮಾಹಿತಿಗೆ, ಮ್ಯಾನೇಜರ್.  ರಂಗಸ್ವಾಮಿ: 9845245894)
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ - Chitratara.com
Copyright 2009 chitratara.com Reproduction is forbidden unless authorized. All rights reserved.