Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ವಿಧಿವಶ
Posted date: 05 Tue, Aug 2025 11:58:37 AM
ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ಇಂದು ಬೆಳಿಗ್ಗೆ 10 ಗಂಟೆಗೆ ವಿಧಿವಶರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್  ಕಳೆದ ತಿಂಗಳು  ಜಾಂಡೀಸ್ ಗೆ ಚಿಕಿತ್ಸೆ ಪಡೆದಿದ್ದರು. ಆದರೆ ಮೊನ್ನೆಯಷ್ಟೇ ಅವರ ಆರೋಗ್ಯದಲ್ಲಿ ತೀವೃ ಏರುಪೇರಾಗಿದ್ದರಿಂದ ಕುಮಾರಸ್ವಾಮಿ ಲೇ ಔಟ್ ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಮಂಗಳವಾರ ಬೆಳಿಗ್ಗೆ  10 ಗಂಟೆಗೆ  ಉಸಿರು ಚೆಲ್ಲಿದ್ದಾರೆ.
 
ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಅಭಿನಯದ ಸತ್ಯ ಚಿತ್ರ ಇನ್ನೂ ರಿಲೀಸಾಗಬೇಕಿತ್ತು. ಎಲ್ಲರ ಜತೆ  ಸ್ನೇಹಮಯ  ವ್ಯಕ್ತಿತ್ವ ಹೊಂದಿದ್ದ  ಸಂತೋಷ್  ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು.  ಇನ್ನೂ 38 ವರ್ಷದ  ಸಂತೋಷ್ ಬಾಲರಾಜ್  ಸದ್ಯದಲ್ಲೇ ಮದುವೆಯಾಗುವ ಸಿದ್ದತೆಯನ್ನೂ  ನಡೆಸಿದ್ದರು. 
 
ಒಬ್ಬ ತಂಗಿ ಹಾಗೂ ತಾಯಿಯನ್ನು ಬಿಟ್ಟು  ಸಂತೋಷ್ ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
(ಹೆಚ್ಚಿನ ಮಾಹಿತಿಗೆ, ಮ್ಯಾನೇಜರ್.  ರಂಗಸ್ವಾಮಿ: 9845245894)
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ವಿಧಿವಶ - Chitratara.com
Copyright 2009 chitratara.com Reproduction is forbidden unless authorized. All rights reserved.