Chief Editor
Manohar. R (Manu)
Photo Journalist
chitrataramanu@gmail.com
+91 9845549026
"ಆಪ್ತ" ರಿರೇಕಾರ್ಡಿಂಗ್ ಸಮಾಪ್ತ
Posted date: 30/September/2010

ಯಶಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಸಂಜೀವ್ ಕುಮಾರ್ ರವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ’ಆಪ್ತ’ ಮಾತುಗಳ ಜೋಡನೆ ಮುಗಿಸಿ ಕರಿಸುಬ್ಬು ಅವರ ಬಾಲಜಿ ಡಿಜಿಟಲ್ ಸ್ಟುಡಿಯೊದಲ್ಲಿ ರಿರೇಕಾರ್ಡಿಂಗ್ ಸಮಾಪ್ತಿಗೊಳಿಸಿದೆ.

’ಅನು’ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಸಂಜೀವ್‌ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ’ಮುಂಗಾರು ಮಳೆ’ ಯಿಂದ ಕನ್ನಡ ಚಿತ್ರ ರಸಿಕರಿಗೆ ಆಪ್ತರಾಗಿ ಇನ್ನು ಅನೇಕ ಚಿತ್ರಗಳಲ್ಲಿ ಅಭಿನಯಿಸಿದ  ನಟಿ ಪೂಜಾಗಾಂಧಿ ’ಆಪ್ತ’ ಚಿತ್ರದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ೫ ಜನ ನಾಯಕಿಯರು ೫ ಗುಣಗಳನ್ನು ಹೊಂದಿರುತ್ತಾರೆ. ಈ ಐವರು ಅನುಮಾನಾಸ್ಪದವಾಗಿ ಕಾಣೆಯಾದಾಗ ಅವರಿಂದ ನಾಯಕಿಗೆ ಯಾವ ರೀತಿ ತೊಂದರೆಯುಂಟಾಗುತ್ತವೆ. ಅದನ್ನು ಆಕೆ ಹೇಗೆ ನಿಭಾಯಿಸಿಕೊಳ್ಳುತ್ತಾಳೆ ಎಂಬುದೇ ’ಆಪ್ತ’ದ ಮುಖ್ಯ ಕಥಾ ಹಂದರ. ಜಿ.ವಿ. ಗಜೇಂದ್ರ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಪಿ.ಎಸ್. ಬಾಬು ಛಾಯಾಗ್ರಹಣ, ಎಸ್ಕರ್ ಮಾರಿಯೋ ಸಂಗೀತ ಸಂಯೋಜನೆ, ಆರ್.ಪಿ. ವೆಂಕಟ್ ಸಂಕಲನ ಹಾಗೂ ಪೆಂಟಾ ಶ್ರೀನಿವಾಸರಾವ್ ನಿರ್ಮಾಣ ಸಾರಥ ವಹಿಸಿದ್ದಾರೆ. ಪ್ರಮುಖ ತಾರಾಗಣದಲ್ಲಿ ಪೂಜಾಗಾಂಧಿ, ಪ್ರಜ್ಞಾ, ಅಚ್ಯುತ್, ನೀರಜ್ ಷಾ, ಮಾನಸಿ, ಭವ್ಯಕಲಾ, ಸಂತೋಷ್ ಬಾಲಾಜಿ ಪ್ರಮುಖ ತಾರಾಗಣದಲ್ಲಿದ್ದಾರೆ.


GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - "ಆಪ್ತ" ರಿರೇಕಾರ್ಡಿಂಗ್ ಸಮಾಪ್ತ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95