Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಂಠೀರವದಲ್ಲಿ "ಪೆರೋಲ್" ಗೆ ಚಿತ್ರೀಕರಣ
Posted date: 16/July/2009

  ಗೌತಮ್ ವಿಷನ್ ಲಾಂಛನದಲ್ಲಿ ಶ್ರೀಮತಿ. ಮಾಲಾ ಎಸ್. ಅರಸ್ ನಿರ್ಮಾಣದಲ್ಲಿ ’ಪೆರೋಲ್’ ಚಿತ್ರದ ಚಿತ್ರೀಕರಣ ಇದೀಗ ನಗರದಲ್ಲಿ ಭರದಿಂದ ಸಾಗಿದೆ.  ಕಳೆದವಾರ ಕಂಠೀರವ ಸ್ಟುಡಿಯೋದಲ್ಲಿ ಪೊಲೀಸ್ ಠಾಣೆಯ ವಿಶೇಷ ಸೆಟ್ಟೊಂದನ್ನು ಹಾಕಿದ್ದು, ಅಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.  ನಗರದಲ್ಲಿ ಒಂದರ ಮೇಲೊಂದರಂತೆ ನಡೆಯುತ್ತಿರುವ  ಕೊಲೆಗಳನ್ನು ಯಾರು ಮಾಡುತ್ತಿದ್ದಾರೆ ಎಂದು ಕಂಡುಹಿಡಿಯುವುದು ಇನ್ಸ್‌ಪೆಕ್ಟರ್  ಕಿಶೋರ್‌ಗೆ   ದೊಡ್ಡ ತಲೆನೋವಾಗಿ ಪರಿಣಮಿಸಿತು.  ಆಗ ನಾಯಕರುಗಳಾದ ಪ್ರದೀಪ್  ನಿಖಿತ್ ಶೆಟ್ಟಿ ಹಾಗೂ ವಿಶ್ವಾಸ್ ಅವರುಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸುತ್ತಾರೆ.  ಈ ಮೇಲ್ಕೊಂಡ ದೃಶ್ಯವನ್ನು ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣದಲ್ಲಿ ಚಿತ್ರೀಕರಿಸಿಕೊಂಡರು.

ಶೇಖರ್  ಕಥೆ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬಾಲಾಜಿ ಕೆ. ಮಿತ್ರನ್-ಸಂಗೀತ, ಸುರೇಶ್ ಅರಸ್-ಸಂಕಲನ, ಬಿ.ಎ.ಮಧು-ಸಂಭಾಷಣೆ, ಎಸ್.ಎಲ್.ಬಾಲಾಜಿ-ನೃತ್ಯನಿರ್ದೇಶನ, ವಿ.ನಾಗೇಂದ್ರ ಪ್ರಸಾದ್-ಬರಗೂರು ರಾಮಚಂದ್ರಪ್ಪ-ಸಾಹಿತ್ಯ, ಎಸ್.ಬಾಹುಬಲಿ ಸುಧಾಕರ್-ಸಹನಿರ್ದೇಶನ, ಎನ್.ಎಸ್.ಚಂದ್ರಶೇಖರ್-ಬಿ.ವಿ.ಜಯಕುಮಾರ್-ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ತಾರಾಬಳಗದಲ್ಲಿ ಪ್ರದೀಪ್, ವಿಶ್ವಾಸ್, ಲಿಖಿತ್ ಶೆಟ್ಟಿ, ಶರತ್‌ಕುಮಾರ್, ಸೂರಜ್, ರಾಣಿ, ಸುಪ್ರಿತಾ, ಕೃತಿಕಾ, ಕಿಶೋರ್, ಬಿ.ಸುರೇಶ್ ಇನ್ನೂ ಮೊದಲಾದವರು ಅಭಿನಯಿಸುತ್ತಿದ್ದಾರೆ.

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಂಠೀರವದಲ್ಲಿ "ಪೆರೋಲ್" ಗೆ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.